ಈ ವಾರ ತೆರೆಗೆ `ದ್ರೋಹಿ`
Posted date: 26 Wed, Aug 2015 – 06:07:41 PM

ಶ್ರೀಆಡ್ ಆರ್ಟ್ಸ್ ಲಾಂಛನದಲ್ಲಿ ಪರಶುರಾಮ.ಬಿ.ದಲಬಂಜನ ನಿರ್ಮಿಸಿರುವ,  ಪಾರ್ವತಿ ಯಮನೂರಪ್ಪ ಜಾದವ, ಸಂಗಮ್ಮ ಎಂ ಮಠಪತಿ, ಜಯಶ್ರೀ ವಿ ಸುತ ಗಟ್ಟಿ ಹಾಗೂ ರೂಪ ಪಿ ಕಮ್ಮಾರ ಅವರ ಸಹ ನಿರ್ಮಾಣವಿರುವ  ‘ದ್ರೋಹಿ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರ ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ಸುಮಾರು ಮೂವತ್ತಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗತ್ತಿದೆ.
ಕಳೆದ ೧೫ವರ್ಷಗಳಿದ ಕನ್ನಡ ಚಿತ್ರರಂಗದಲ್ಲಿ ಮೇಕಪ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಕಾಶ್ ಎಸ್ ಕಮ್ಮಾರ್ ಅವರು ಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಎಂ.ವಿಜಯಕುಮಾರ್ ಅವರ ಸಂಗೀತವಿರುವ ಈ ಚಿತ್ರಕ್ಕೆ ಶಿವಶರಣು ಸಿಗ್ನಳ್ಳಿ ಅವರ ಛಾಯಾಗ್ರಹಣವಿದೆ. ಬಸವರಾಜ ನಂದಗಡ ಸಂಕಲನ, ಜಶ್ವಂತ ಜಾದವ ಸಾಹಸ ನಿರ್ದೇಶನ, ಪ್ರಶಾಂತ್, ಜಾಕ್ ರೋಹಿತ್, ಸಂದೀಪ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಪ್ರಕಾಶ್ ಕಮ್ಮಾರ, ರಘು ರೂಗಿ ರಚಿಸಿದ್ದಾರೆ. ಉಮೇಶ್ ಪುರಣಿಕ ಮಠ ಹಾಗೂ ಪರಶುರಾಮ ಬಿ ದಲಬಂಜನ  ಬರೆದಿದ್ದಾರೆ. ಜಶ್ವಂತ ಜಾದವ್, ಪ್ರಕಾಶ್, ನಾಯಕ್, ಅಮೃತಾಶ್ರೀ(ಗಾಯತ್ರಿ), ಸುನೀತಾ ಕಾಟವೆ, ಯಮನೂರ ಜಾದವ, ಪ್ರಶಾಂತ, ಮಠಪತಿ, ನೇತ್ರ, ಶಿವಾನಂದ ಮುತ್ತಣ್ಣವರ, ಅಶೊಕ ಕಾಟವೆ, ಅಲ್ತಾಪ ಕಿತ್ತೂರ ಹಾಗೂ ಹುಬ್ಬಳ್ಳಿ- ಧಾರವಾಡದ ಸ್ಥಳೀಯ ಕಲಾವಿದರು ಮತ್ತು ರಾಜಕೀಯ ವ್ಯಕ್ತಿಗಳು ಅಭಿನಯಿಸಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed